• Wed. Sep 17th, 2025

Tv2 News Kannada

ನೇರ ನಿತ್ಯ ನಿರಂತರ ಸುದ್ದಿಗಳು

ವಿಜಯಪುರದಲ್ಲಿ ಅಕ್ರಮ ಅಕ್ಕಿ ಸಾಗಣೆ, ಸಿಕ್ಕಿ ಬಿದ್ದ ಅಪರಾಧಿ.

ByANAND BABU TALAWAR

Sep 15, 2025 #rice
SHARE


ವಿಜಯಪುರದಲ್ಲಿ ಅಕ್ರಮ ಅಕ್ಕಿ ಸಾಗಣೆ: ಪೊಲೀಸ್ ಮತ್ತು ಆಹಾರ ಇಲಾಖೆಯ ಜಂಟಿ ಕಾರ್ಯಾಚರಣೆ, 210 ಕ್ವಿಂಟಲ್ ಅಕ್ಕಿ ಜಪ್ತು

ವಿಜಯಪುರ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ 210 ಕ್ವಿಂಟಲ್ ಅಕ್ಕಿಯನ್ನು ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ಈ ಸಾಗಣೆಗೆ ಬಳಸಲಾಗುತ್ತಿದ್ದ ಲಾರಿಯನ್ನೂ ಸೇರಿಸಿ ಒಟ್ಟು 5 ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಥಣಿ ತಾಲೂಕಿನ ಆಜೂರ ಗ್ರಾಮದ ನಿವಾಸಿ ಲಾರಿ ಚಾಲಕ ಗಜಾನನ ಮಕಾಳೆ ಅವರನ್ನು ಇದಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. ಅಥಣಿಯ ಗಣೇಶವಾಡಿಯ ಮಾರುತಿ ದೊಡಮನಿ ಮತ್ತು ಬೆಳಗಾವಿಯ ಆಜಾದ್ ನಗರದ ಇಟ್ಬಾಲ್ ತಹಶೀಲ್ದಾರ್ ಅವರ ಸೂಚನೆಯ ಮೇರೆಗೆ ಚಾಲಕ ಗಜಾನನ ವಿಜಯಪುರದ ಎಫ್‌ಸಿಐ ರೈಲ್ವೆ ಗೂಡ್ಸ್ ಶೆಡ್ನಿಂದ ಈ ಅಕ್ಕಿಯನ್ನು ಸಾಗಿಸುತ್ತಿದ್ದ  ವಿಷಯ ತಿಳಿದುಬಂದಿದೆ.

ಈ ಬಗ್ಗೆ ಸಿಕ್ಕ ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, 4.76 ಲಕ್ಷ ರೂಪಾಯಿ ಮೌಲ್ಯದ 210.43 ಕ್ವಿಂಟಲ್ ಅಕ್ಕಿ ಮತ್ತು ಲಾರಿಯನ್ನು ವಶಪಡಿಸಿಕೊಂಡರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಮುಂದಿನ ತನಿಖೆ ನಡೆಯುತ್ತಿದೆ.


SHARE

By ANAND BABU TALAWAR

ನಿರ್ದೇಶಕ, ಮುಖ್ಯ ಸಂಪಾದಕರು ಮತ್ತು ಮಾಲಿಕ: ಶ್ರೀ ಆನಂದ ಬಾಬು ತಳವಾರ ಅವರು ಈ TV 2 ನ್ಯೂಸ್ ಕನ್ನಡದ ನಿರ್ದೇಶಕರಾಗಿದ್ದು, ಮುಖ್ಯ ಸಂಪಾದಕರಾಗಿಯೂ ಮತ್ತು ಮಾಲಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮರ್ಥ ನಾಯಕತ್ವದೊಂದಿಗೆ ನಿಷ್ಪಕ್ಷಪಾತ ಸುದ್ದಿಯನ್ನು ಜನತೆಗೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡದ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಇವರು, ಸಮರ್ಥ ಸಂಪಾದಕೀಯ ತೀರ್ಮಾನಗಳ ಮೂಲಕ ನಿಜವಾದ ಮಾಹಿತಿ ನೀಡಲು ಸದಾ ಪ್ರಯತ್ನಿಸುತ್ತಿದ್ದಾರೆ.

Leave a Reply

Your email address will not be published. Required fields are marked *